ತೀರ್ಥಯಾತ್ರೆ

ಆ ಊರು ಈ ಊರು
ಯಾವುದ್ಯಾವುದೋ ಊರು
ದೇವರ ಊರೆಂದು ನಂಬಿ
ಬಂಧು ಮಿತ್ರ, ಕಳತ್ರರ ಕೂಡಿ
ಸಾವಿರ, ಸಾವಿರ ಖರ್ಚುಮಾಡಿ
ತೀರ್ಥಯಾತ್ರೆ ಮಾಡಿ
ಧನ್ಯತೆಯ ಭಾವವನು ತಳೆಯುವಿರಿ.

ವಿಚಾರ ಮಾಡಿ
ಅವನು ಎಲ್ಲೆಲ್ಲೂ, ಎಲ್ಲರಲ್ಲೂ, ಎಲ್ಲಾ ರೂಪ
ಆಕಾರದಲ್ಲಿರುವನು
ನಂಬಿಕೆ, ನಿಜವೋ ಸುಳ್ಳೋ ಹೇಳಿ!
ಅಲ್ಲಿರುವನು, ಅದೇ ರೂಪದವನು, ಅವನೇ ಇವನು!
ಎನ್ನುವುದು ಅಪಚಾರವಲ್ಲವೇನು?

ಕಳಚಿ! ಭ್ರಮೆ ಕಳಚಿ!
ದೈವದೂರಿನಲ್ಲೇನಾದರೂ ವಿಶೇಷ ಕಾಣುವಿರಾ?
ಅದೇ ಕಲ್ಲು ! ಅದೇ ಮಣ್ಣು !
ಅದೇ ಜನ ! ಅದೇ ಬಾಳುತಾನೆ ?

ತಮ್ಮಲ್ಲಿ, ತಾವಿರುವಲ್ಲಿ
ಕಂಡು ಆನಂದಿಸದವರ
ಎಲ್ಲಿಯೋ ಕಾಣಬಹುದೆಂಬ ಹುಂಬ ಜನರ
ಹತಾಶಾ ಪೂರ್ಣ ಖಾಲಿ ನಡೆತೆಯಲ್ಲವೇನು ?

ಇದ್ದಲ್ಲಿಯೇ ಇದ್ದು
ಏಕತಾನತೆಯಿಂದ ರೋಸಿಹೋಗಿ
ಬದಲಾವಣೆ ಬಯಸಿ
ಬಿಡುವು ಮಾಡಿಕೊಂಡು
ಒಂದೆರೆಡು ದಿನ ಹೊರಗೆ ಹೋಗಿ
ಸುತ್ತಾಡಿ

ಹೊಸ ಜನ, ಹೊಸ ಪರಿಸರ ದರ್ಶನದ
ಜೀವನೋತ್ಸಾಹ ಮರುಪೂರಣ
ಬೋಧ ಕ್ಷಣಗಳ
ಆನಂದದಾಯಕ ಪ್ರವಾಸವಲ್ಲವೇನು ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಪದ್ಬಾಂಧವ ?
Next post ಗುದ್ದಲಿಗಿದೆಯೇ ಲೇಖನಿ ಶಕ್ತಿ ?

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

cheap jordans|wholesale air max|wholesale jordans|wholesale jewelry|wholesale jerseys